✨ New Arrivals Just Dropped!Explore
HomeStore

Bhakthi Sudha Tarangini

Product image 1
Product image 2
Product image 3
Product image 4
Product image 5
Product image 6
Product image 7
Product image 8
Product image 9
Product image 10
Product image 11

Bhakthi Sudha Tarangini

Bhakthi Sudha Tarangini

ಶ್ರೀ ಶ್ರೀಗಳು ತಮ್ಮ ವಿಜಯಯಾತ್ರಾಕಾಲದಲ್ಲಿ ಅನೇಕ ದೇವತಾ ಮೂರ್ತಿಗಳನ್ನು ಹಲವು ಕ್ಷೇತ್ರಗಳಲ್ಲಿ ಪ್ರತಿಷ್ಠಾಪಿಸಿದರು. ಅವರು ಸಂದರ್ಶಿಸಿದ ಕ್ಷೇತ್ರಗಳಲ್ಲೆಲ್ಲಾ ದೇವತಾ ಸ್ತೋತ್ರಗಳನ್ನು ರಚಿಸಿದರು. ಅವರು ರಚಿಸಿದ ಸ್ತೋತ್ರಗಳ ಸಂಕಲನವೇ 'ಭಕ್ತಿಸುಧಾತರಂಗಿಣಿ', ಸಕಲ ದೇವತಾ ಸ್ತುತಿಗಳಿರುವ ಈ ಗ್ರಂಥದಲ್ಲಿ ಶ್ರೀಶಾರದಾಂಬೆಯ ಸ್ತುತಿಗಳು ಪ್ರಮುಖವಾಗಿವೆ. ಈ ಸ್ತೋತ್ರಗಳನ್ನು ಪಠಿಸುತ್ತಿದ್ದರೆ ಶ್ರೀಶ್ರೀಗಳೇ ಸಾಕ್ಷಾತ್ ಶ್ರೀಶಂಕರಭಗವತ್ಪಾದರು ಎಂದೆನಿಸದಿರದು ಮತ್ತು ಅವರು ಶ್ರೀಶಾರದಾಂಬೆಯ ಸ್ವಂತ ಮಕ್ಕಳೆಂದೂ ಖಚಿತವಾಗುವುದು. ಹೆಸರಿಗೆ ತಕ್ಕಂತೆ ಈ ಸ್ತೋತ್ರಗಳು ಪಾಠಕರನ್ನು ಭಕ್ತಿಯೆಂಬ ಅಲೆಗಳ ಮೇಲೆ ತೇಲಿಸುತ್ತಾ ಪರಮಾನಂದವನ್ನು ಉಂಟುಮಾಡುತ್ತವೆ. ಮನೋಹರವಾದ ಈ ಸ್ತೋತ್ರಗಳಲ್ಲಿ, ತಾಯಿಗೆ ಮಗುವಿನ ನುಡಿಗಳೇ ಆನಂದದಾಯಕವೆಂಬಂತೆ, ಶ್ರೀಶ್ರೀಗಳು ಭಕ್ತನು ತನ್ನ ಮನಸ್ಸನ್ನು ದೇವರೆದುರು ಹೇಗೆ ತೋಡಿಕೊಳ್ಳಬೇಕೆಂದು ಸರಳವಾಗಿ ಸುಂದರವಾಗಿ ನಿರೂಪಿಸಿದ್ದಾರೆ. ಪರಮಾನಂದವೇ ಪ್ರಾಪ್ತವಾದ ಬಳಿಕ, ಲೌಕಿಕ ಸಾಹಿತ್ಯಗಳ ದೃಷ್ಟಿಕೋನದಲ್ಲಿ ಈ ಕೃತಿಯ ವಿಮರ್ಶೆಯು ಅನಾವಶ್ಯಕ ಮತ್ತು ಅಪರಾಧವೂ ಕೂಡ. ಪರಮಾತ್ಮನ ಅನುಗ್ರಹವಾದರೆ ಮೂಕನೂ ಕೂಡ ಪಂಡಿತನಾಗುವನು, ಯೋಗಿಯಾಗುವನು, ಮೋಕ್ಷವನ್ನು ಪಡೆಯುವನು ಎಂಬುದನ್ನು ಬಾರಿ ಬಾರಿಗೂ ಘೋಷಿಸುತ್ತಾ ಪರಮಾತ್ಮನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದೊಂದೇ ಮುಖ್ಯವೆಂದು ಸಾರುತ್ತಿರುವ ಸ್ತೋತ್ರಗುಚ್ಛವು ಈ 'ಭಕ್ತಿಸುಧಾತರಂಗಿಣೀ'. ಪರಮಾತ್ಮನ ಅನುಗ್ರಹವಾಗಬೇಕಾದರೆ ಗುರುವಿನ ಅನುಗ್ರಹವಿರಲೇಬೇಕು. ಈ ಸ್ತೋತ್ರಗಳು ಶ್ರೀಶ್ರೀಗಳ ಅನುಗ್ರಹವೆಂದು ತಿಳಿದು ಪಠಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುವು.

$2.74

Original: $7.84

-65%
Bhakthi Sudha Tarangini

$7.84

$2.74

Product Information

Shipping & Returns

Description

ಶ್ರೀ ಶ್ರೀಗಳು ತಮ್ಮ ವಿಜಯಯಾತ್ರಾಕಾಲದಲ್ಲಿ ಅನೇಕ ದೇವತಾ ಮೂರ್ತಿಗಳನ್ನು ಹಲವು ಕ್ಷೇತ್ರಗಳಲ್ಲಿ ಪ್ರತಿಷ್ಠಾಪಿಸಿದರು. ಅವರು ಸಂದರ್ಶಿಸಿದ ಕ್ಷೇತ್ರಗಳಲ್ಲೆಲ್ಲಾ ದೇವತಾ ಸ್ತೋತ್ರಗಳನ್ನು ರಚಿಸಿದರು. ಅವರು ರಚಿಸಿದ ಸ್ತೋತ್ರಗಳ ಸಂಕಲನವೇ 'ಭಕ್ತಿಸುಧಾತರಂಗಿಣಿ', ಸಕಲ ದೇವತಾ ಸ್ತುತಿಗಳಿರುವ ಈ ಗ್ರಂಥದಲ್ಲಿ ಶ್ರೀಶಾರದಾಂಬೆಯ ಸ್ತುತಿಗಳು ಪ್ರಮುಖವಾಗಿವೆ. ಈ ಸ್ತೋತ್ರಗಳನ್ನು ಪಠಿಸುತ್ತಿದ್ದರೆ ಶ್ರೀಶ್ರೀಗಳೇ ಸಾಕ್ಷಾತ್ ಶ್ರೀಶಂಕರಭಗವತ್ಪಾದರು ಎಂದೆನಿಸದಿರದು ಮತ್ತು ಅವರು ಶ್ರೀಶಾರದಾಂಬೆಯ ಸ್ವಂತ ಮಕ್ಕಳೆಂದೂ ಖಚಿತವಾಗುವುದು. ಹೆಸರಿಗೆ ತಕ್ಕಂತೆ ಈ ಸ್ತೋತ್ರಗಳು ಪಾಠಕರನ್ನು ಭಕ್ತಿಯೆಂಬ ಅಲೆಗಳ ಮೇಲೆ ತೇಲಿಸುತ್ತಾ ಪರಮಾನಂದವನ್ನು ಉಂಟುಮಾಡುತ್ತವೆ. ಮನೋಹರವಾದ ಈ ಸ್ತೋತ್ರಗಳಲ್ಲಿ, ತಾಯಿಗೆ ಮಗುವಿನ ನುಡಿಗಳೇ ಆನಂದದಾಯಕವೆಂಬಂತೆ, ಶ್ರೀಶ್ರೀಗಳು ಭಕ್ತನು ತನ್ನ ಮನಸ್ಸನ್ನು ದೇವರೆದುರು ಹೇಗೆ ತೋಡಿಕೊಳ್ಳಬೇಕೆಂದು ಸರಳವಾಗಿ ಸುಂದರವಾಗಿ ನಿರೂಪಿಸಿದ್ದಾರೆ. ಪರಮಾನಂದವೇ ಪ್ರಾಪ್ತವಾದ ಬಳಿಕ, ಲೌಕಿಕ ಸಾಹಿತ್ಯಗಳ ದೃಷ್ಟಿಕೋನದಲ್ಲಿ ಈ ಕೃತಿಯ ವಿಮರ್ಶೆಯು ಅನಾವಶ್ಯಕ ಮತ್ತು ಅಪರಾಧವೂ ಕೂಡ. ಪರಮಾತ್ಮನ ಅನುಗ್ರಹವಾದರೆ ಮೂಕನೂ ಕೂಡ ಪಂಡಿತನಾಗುವನು, ಯೋಗಿಯಾಗುವನು, ಮೋಕ್ಷವನ್ನು ಪಡೆಯುವನು ಎಂಬುದನ್ನು ಬಾರಿ ಬಾರಿಗೂ ಘೋಷಿಸುತ್ತಾ ಪರಮಾತ್ಮನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದೊಂದೇ ಮುಖ್ಯವೆಂದು ಸಾರುತ್ತಿರುವ ಸ್ತೋತ್ರಗುಚ್ಛವು ಈ 'ಭಕ್ತಿಸುಧಾತರಂಗಿಣೀ'. ಪರಮಾತ್ಮನ ಅನುಗ್ರಹವಾಗಬೇಕಾದರೆ ಗುರುವಿನ ಅನುಗ್ರಹವಿರಲೇಬೇಕು. ಈ ಸ್ತೋತ್ರಗಳು ಶ್ರೀಶ್ರೀಗಳ ಅನುಗ್ರಹವೆಂದು ತಿಳಿದು ಪಠಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುವು.

Bhakthi Sudha Tarangini | Sharada Granthalaya